ಭಾನುವಾರ, ನವೆಂಬರ್ 22, 2009

ಕನ್ನಡ ರಾಜ್ಯೋತ್ಸವ - ೨೦೦೯


KannadaRajyothsava2009@ALU


ವಿಡಿಯೋ:
http://www.youtube.com/user/shrigandhaALU


ನವೆಂಬರ್ ೧೨ಗುರುವಾರದಂದುನಮ್ಮ ಅಲ್ಕಟೆಲ್-ಲ್ಯೂಸೆಂಟ್ ನಲ್ಲಿ, "ಶ್ರೀಗಂಧ ಕನ್ನಡ ಬಳಗ"ದ ನೇತೃತ್ವದಲ್ಲಿ "ಕನ್ನಡ ರಾಜ್ಯೋತ್ಸವಸಮಾರಂಭವನ್ನು ಹಮ್ಮಿಕೊಂಡಿದ್ದೆವುಅಂದು ಎಲ್ಲೆಲ್ಲೂ ಹಬ್ಬದವಾತಾವರಣಬೆಳಿಗ್ಗೆ ಎಲ್ಲರನ್ನೂ ಮೊದಲು ಸ್ವಾಗತಿಸಿದ್ದು ಮಾವಿನ ತೋರಣಗಳುಹೂವಿನ ಗುಚ್ಛಗಳುದೀಪಾಲಂಕೃತವಾಗಿನಿಂತಿದ್ದ ಕನ್ನಡಾಂಬೆ ಹಾಗೂ ಕರ್ನಾಟಕದ ಭೂಪಟ ಮತ್ತು ಬಾವುಟಗಳನ್ನೊಳಗೊಂಡ ಸುಂದರ ರಂಗೋಲಿ.  ಅದಕ್ಕೆ ಪೂರಕವಾಗಿನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವೆಂಬಂತೆ ಅಲ್ಲಿಯೇ ಪಕ್ಕದಲ್ಲಿ ಹೆಮ್ಮೆಯಿಂದ ನಿಂತಿತ್ತು ಮೈಸೂರಿನ ಅರಮನೆ ಮತ್ತುಜಂಬೂಸವಾರಿ.

ಕಾರ್ಯಕ್ರಮವನ್ನು ಕೇವಲ ಕನ್ನಡಿಗರನ್ನು ಮಾತ್ರವಲ್ಲದೇಕನ್ನಡೇತರರ ಸಹೋದ್ಯೋಗಿಗಳನ್ನೂ ಸೇರಿಸಿಕೊಂಡುಯೋಜಿಸಲಾಗಿತ್ತುಹಲವು ದಿನಗಳಿಂದ ಸಹೋದ್ಯೋಗಿಗಳನ್ನು ಕುತೂಹಲಕ್ಕೀಡು ಮಾಡಿದ್ದ ಆಹ್ವಾನ ಫಲಕಎಲ್ಲರೂ ತಮ್ಮದೇರೀತಿಯಲ್ಲಿ ಹಬ್ಬಕ್ಕೆ ಅಣಿಯಾಗಲು ಅನುವು ಮಾಡಿಕೊಟ್ಟಿತ್ತು.  ಬಹಳಷ್ಟು ಜನ ವಿಶೇಷವಾದ ಸಾಂಸ್ಕೃತಿಕ ಉಡುಗೆ-ತೊಡುಗೆಗಳಲ್ಲಿವಿಜೃಂಭಿಸಿ ಬಣ್ಣದ ಲೋಕವನ್ನು ತೆರೆದಿಟ್ಟಿದ್ದರು.

ದಿನ ಪೂರ್ತಿಉಪಹಾರ ಮಂದಿರದಲ್ಲಿ ಕನ್ನಡದ ಸುಮಧುರ ಹಾಡುಗಳುಕನ್ನಡದ ಬಗೆಗಿನ ದೃಶ್ಯಾವಳಿಗಳು ಜನಮನ ತಣಿಸಿತ್ತು.  ಟೋಟಲ್ ಕನ್ನಡ.ಕಾಂ ನವರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕನ್ನಡ ಭಾಷೆಸಾಹಿತ್ಯಚಲನಚಿತ್ರಗಳಿಗೆ ಸಂಬಂಧಪಟ್ಟಪುಸ್ತಕಗಳುಹಾಡಿನ ಮುದ್ರಿಕೆಗಳು ಹಾಗೂ ಇನ್ನಿತರ ವಸ್ತುಗಳ ಪ್ರದರ್ಶನ ಕನ್ನಡಿಗರನ್ನು ಸೆರೆಹಿಡಿದರೆಪ್ರವಾಸೋದ್ಯಮಇಲಾಖೆಯ ಕೈಪಿಡಿಗಳ ಮೂಲಕ ಪ್ರವಾಸಿ ಸ್ಥಳಗಳ ಮಾಹಿತಿಕನ್ನಡೇತರ ಮಿತ್ರರ ಆಸಕ್ತಿ ಕೆರಳಿಸಿತ್ತು.

ಅಂದುಕೊಂಡಂತೆಸಂಜೆ  ಗಂಟೆಗೆ ಸರಿಯಾಗಿ ಕಾರ್ಯಕ್ರಮವನ್ನು ಪ್ರಾರಂಭಿಸುವ ಹೊತ್ತಿಗೆನಿರೀಕ್ಷೆಗೂ ಮೀರಿ ಕಿಕ್ಕಿರಿದು ಸೇರಿದ್ದಕನ್ನಡ ಪ್ರೇಮಿಗಳನ್ನು ನೋಡಿ ಹೃದಯ ತುಂಬಿಬಂದಿತ್ತುನಮ್ಮ ಕಛೇರಿಯ ಮುಖ್ಯಸ್ಥೆ ಶ್ರೀಮತಿ ಚಿತ್ರಾ ಕಸ್ತೂರಿಯವರುಸಾಂಪ್ರದಾಯಿಕವಾಗಿ ದೀಪ ಬೆಳಗುತ್ತಿದ್ದರೆಹಿನ್ನೆಯಲ್ಲಿ "ಹಚ್ಚೇವು ಕನ್ನಡ ದೀಪ ನೃತ್ಯ ಮತ್ತು ಹಾಡು ಮೇಳೈಸುತ್ತಿತ್ತು

ಬಳಗದ ಪರಿಚಯ ಮತ್ತು ಅದರ ಧ್ಯೇಯೋದ್ದೇಶಗಳ ಬಗೆಗಿನ ನಿರೂಪಣೆಬಳಗದ ಬಗೆಗೆ ಗೌರವ ಮತ್ತು ಆತ್ಮೀಯತೆಯನ್ನುಮೂಡಿಸಿತು.  ಪೂರ್ವಭಾವಿಯಾಗಿ ನಡೆಸಲ್ಪಟ್ಟನಮ್ಮ ಶಾಲಾದಿನಗಳನ್ನು ನೆನಪಿಸುವಂಥ ಪ್ರಬಂಧ ಸ್ಪರ್ಧೆಆಶುಭಾಷಣ ಸ್ಪರ್ಧೆಮತ್ತು ಚಿತ್ರವಿನ್ಯಾಸ ಸ್ಪರ್ಧೆಗಳ ವಿಜೇತರಿಗೆ ಪುಸ್ತಕಗಳುಮುದ್ರಿಕೆಗಳ ರೂಪದಲ್ಲಿ ಬಹುಮಾನ ವಿತರಿಸಲಾಯಿತು.

ನಂತರದೀಪಾವಳಿಯ ನಭದಲ್ಲಿ ಒಂದಾದರೊಂದಂತೆ ಅಪ್ಪಳಿಸುವ ಹೂಬಾಣಗಳಂತೆಬಣ್ಣ-ಬಣ್ಣದ ರಂಜನೀಯ ಕಾರ್ಯಕ್ರಮಗಳುಸಭಿಕರನ್ನು ಕಾಲದ ಪರಿವಿರದಂತೆ ಹಿಡಿದಿಟ್ಟವುಭಾವಗೀತೆವಿಶೇಷ ವಾದ್ಯಸಂಗೀತಚಿತ್ರಗೀತೆನಗೆ ನಾಟಕಯಕ್ಷಗಾನದಹಾಡುಅರ್ಜುನ ಬಬ್ರುವಾಹನರ ವೀರಾವೇಶಸಮೂಹಗಾನರತ್ನನ ಪದಗಳ ಕುಡುಕನ ಕನ್ನಡಾಭಿಮಾನವನ್ನುಆಹಾವಹಿಸಿಕೊಂಡ ಕಿರು ನಾಟಕನಾಡಗೀತೆ ಹಾಗೂ ಹಲವು ಕನ್ನಡ ಚಿತ್ರಗೀತೆಗಳ ಸಮೂಹ ನೃತ್ಯ ಕಿವಿ-ಕಣ್ಣಿಗಾದರೆಕಾಯಿಹೋಳಿಗೆಬೆಳಗಾವಿ ಕುಂದಅವಲಕ್ಕಿ ಖಾರ ನಾಲಿಗೆಯನ್ನು ತಣಿಸಿದವು.

 ವಿನೋದಾವಳಿಗಳ ಮಧ್ಯೆ ಕನ್ನಡಿಗರಿಗೆಕನ್ನಡೇತರರಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿಕೊಡುವಂತಹ ರಸಪ್ರಶ್ನೆಗಳುಅಣುಬಾಂಬ್ ಗಳಂತೆ ಸಿಡಿಯುತ್ತಾ ಎಲ್ಲರ ಜ್ಞಾನವನ್ನು ಒರೆಗೆ ಹಚ್ಚಿದವು.  ಕಾರ್ಯಕ್ರಮದ ಕೊನೆಗೆ ನಾಡಗೀತೆಯನ್ನುಹಾಡುತ್ತಿದ್ದಂತೆಸಭಿಕರೆಲ್ಲರೂ ಎದ್ದು ನಿಂತು ಗೌರವ ಸೂಚಿಸಿದಾಗ ಎಲ್ಲರ ಮೈಯಲ್ಲೂ ಮಿಂಚು ಹರಿದ ಭಾವ

ಒಟ್ಟಿನಲ್ಲಿ ಅಂದಿನ ಪ್ರತಿಯೊಂದು ಕಾರ್ಯಕ್ರಮ ಅಚ್ಚುಕಟ್ಟುತನಸಮಯಪ್ರಜ್ಞೆಕಾರ್ಯದಕ್ಷತೆಪ್ರತಿಭೆಆತ್ಮೀಯತೆ ಮತ್ತು ಎಲ್ಲಕ್ಕೂಮಿಗಿಲಾಗಿ ಕನ್ನಡ ಪ್ರೇಮದಲ್ಲಿ ಮೆದ್ದು ಜನರ ಮನದಲ್ಲಿ ಅಚ್ಚಳಿಯದಂತೆ ಮಾಡಿತು.

ಮಂಗಳವಾರ, ಜುಲೈ 28, 2009

ಕಾರ್ಗಿಲ್ ಯೋಧ ರಂಗಪ್ಪ ನವರಿಗೆ ಸಹಾಯ

ಕಾರ್ಗಿಲ್ ಯೋಧ ರಂಗಪ್ಪ ನವರಿಗೆ ಸಹಾಯ, ಜುಲೈ ೨೦೦೯

ಶನಿವಾರ, ಜೂನ್ 6, 2009

ಅಂತರಾಷ್ಟ್ರೀಯ ಕಾಳಜಿಯ ದಿನ

ಜೂನ್ ೬ ೨೦೦೯ ರಂದು ನಮ್ಮ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಕಾಳಜಿಯ ದಿನದಂದು ಬಳಗದ ವತಿಯಿಂದ ಸಕ್ರಿಯವಾಗಿ ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟೆವು.

ಅಂತರಾಷ್ಟ್ರೀಯ ಕಾಳಜಿಯ ದಿನದ ಕಾರ್ಯಕ್ರಮ, ಜೂನ್ 2009

ಮಂಗಳವಾರ, ಮಾರ್ಚ್ 17, 2009

ಗುಡಿಬಂಡೆಯ ಶಾಲೆ ಮತ್ತು ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಂದ ಪ್ರಶಂಸಾ ಪತ್ರ



ಶನಿವಾರ, ಮಾರ್ಚ್ 14, 2009

ಗುಡಿಬಂಡೆ ಶಾಲೆಗೆ ಗಣಕಯಂತ್ರ ಮತ್ತು ಪುಸ್ತಕಗಳ ಕೊಡುಗೆ

ಗುಡಿಬಂಡೆಯ "ಸರ್ಕಾರಿ ಬಾಲಕಿಯರ ಪ್ರೌಢಶಾಲೆ" ಗೆ ೫೦೦೦ ರೂ ಮೌಲ್ಯದ ಗ್ರಂಥಾಲಯ ಮತ್ತು ೨ ಗಣಕಯಂತ್ರ:

ಗುಡಿಬಂಡೆ ಶಾಲೆ ಭೇಟಿ, ೧೪ನೇ ಮಾರ್ಚಿ ೨೦೦೯


ಶ್ರೀಗಂಧ ಕನ್ನಡ ಬಳಗ ಅಂದು ಅಂಥದೊಂದು ತೀರ್ಮಾನ ಕೈಗೊಳ್ಳದಿದ್ದರೆ, ಮಾರ್ಚ್ ಹದಿನಾಲ್ಕು,೨೦೦೯ , ಅದರ ರೀತಿಯೇ ಬಂದು ಹೋಗುವ ವಾರಾಂತ್ಯದ ಬಹುತೇಕ ಆಲಸಿ ಶನಿವಾರದಂತೆ ನೆನಪಿನ ಅಂಗಳದಲ್ಲಿ ಕಳೆದುಹೋಗುತ್ತಿತ್ತೇನೋ......ಆದರೆ ಅಂದು ಆದದ್ದೇ ಬೇರೆ... ಶ್ರೀಗಂಧ ತನ್ನ ಸುಗಂಧವನ್ನು ಪಸರಿಸಲು ಆ ದಿನದ ಮುಂಜಾವಿನಲ್ಲಿ ಚಿಕ್ಕಬಳ್ಳಾಪುರದ ಹಾದಿಯಲ್ಲಿ ಹೊರಟು ನಿಂತಿತ್ತು...ಬಳಗದ ಒಂದು ಚಿಕ್ಕ ಚೊಕ್ಕದಾದ ಕಾರ್ಯಕ್ಕೆ ಸಾಕ್ಷಿಗಳಾಗಲು ಹೊರಟಿದ್ದ ನಮಗೆ(ನನ್ನೊಡನೆ ಸುಂದರೇಷ್ ಹಾಗೂ ಆನಂದ್) ಗುಡಿಬಂಡೆ ತಲುಪಿದೊಡನೆ ಕಂಡಿದ್ದು ದೃಶ್ಯ ಕಾವ್ಯವೇ ಸರಿ...

ಬಿರು ಬೇಸುಗೆಯಲ್ಲೂ ಮೈ ತುಂಬಿದ ಸುಂದರ ಕೆರೆ..ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಬಂಡೆಗಳ ಸಾಲು.. ನಮ್ಮನ್ನು ಸ್ವಾಗತಿಸಲೋ!! ಎಂಬಂತೆ ಶಿಸ್ತಾಗಿ ಕುಳಿತಿದ್ದ ಅಕ್ಕರೆಯ ಕೊಕ್ಕರೆಗಳ ಸಾಲು.. ಹೀಗೆ ಸಾಗಿದ ನಮಗೆ ಶಾಲೆ ತಲುಪಿದೊಡನೆ ಸಿಕ್ಕ ಸ್ವಾಗತ ನಿಜವಾಗಲೂ ಸ್ಮರಣಾರ್ಹ. ಆತ್ಮೀಯತೆಯಿಂದ ನಮ್ಮನ್ನು ಬರಮಾಡಿಕೊಂಡ ರೀತಿ..ಕಾಳಜಿಯಿಂದ ಉಪಹಾರ ಬಡಿಸಿದ್ದು..ಅವರ ಸಂಭ್ರಮ.. ಅದೊಂದು ಸುಂದರ ಅನುಭವ.......ಬಹುಷಃ ಕನಿಷ್ಠ ಐದಾರು ಮಂದಿಯಾದರೂ ಬರುವರೆಂಬ ನಿರೀಕ್ಷೆಯಲ್ಲಿ ಅವರಿದ್ದರು ಎಂದು ತೋರುತ್ತದೆ..ಸ್ವಲ್ಪ ಹೆಚ್ಚಿಗೆ ತಯಾರಿ ಮಾಡಿಕೊಂಡಿದ್ದರು..ಹೋದದ್ದು ಮೂರೇ ಮಂದಿ..ಇರಲಿ ..... .... ಸ್ವಲ್ಪ ಪೀಠಿಕೆ ಹೆಚ್ಚಾಯ್ತೇನೋ:) ..

ಈಗ ವಿಷಯಕ್ಕೆ ಬರೋಣ.. ಈ ಮೊದಲೇ ತಿಳಿದಂತೆ ಗುಡಿಬಂಡೆಯ ಶಾಲೆಗೆ ಬಳಗದ ವತಿಯಿಂದ ಗ್ರಂಥಾಲಯಕ್ಕಾಗಿ ಪುಸ್ತಕಗಳು ಹಾಗೂ ಗಣಕ ಯಂತ್ರಗಳನ್ನು ನೀಡಲು ನಿರ್ಧರಿಸಿದ್ದೆವು..ಅದರ ಕಾರ್ಯಾರ್ಥವಾಗಿ ನಾವು ಗುಡಿಬಂಡೆಯ ಶಾಲೆಗೆ ಭೇಟಿ ನೀಡಿದ್ದೆವು..

ಬರಿಯ ಪುಸ್ತಕಗಳಿದ್ದರೆ ಸಾಲದು,ಅವುಗಳ ರಕ್ಷಣೆಗೂ ವ್ಯವಸ್ಥೆಯಾಗಬೇಕೆಂದು ಆನಂದ್ ರವರು ಕೊಡುಗೆಯಾಗಿ ನೀಡಿದ ಪುಸ್ತಕ ಕಪಾಟು ಪುಸ್ತಕಗಳ ಆಗಮನವನ್ನು ನಿರೀಕ್ಷಿಸುತ್ತಾ ಶಾಲಾ ಕಛೇರಿಯಲ್ಲಿ ನಿಂತಿತ್ತು ..

ಅದರ ನಿರೀಕ್ಷಣೆಯನ್ನು ತಣಿಸುವ ನಿಟ್ಟಿನಲ್ಲಿ ಪುಸ್ತಕಗಳನ್ನು ಶಾಲಾ ಶಿಕ್ಷಕರ ಸುಪರ್ದಿಗೆ ವಹಿಸಿದೆವು..

ಹಾಗೆ ಎರಡು ಗಣಕ ಯಂತ್ರಗಳನ್ನು ಶಾಲೆಗೆ ನೀಡಲಾಗಿದೆ ...ಅವುಗಳನ್ನು ಈ ಚಿತ್ರದಲ್ಲಿ ಕಾಣಬಹುದು. ಆ ಶಾಲೆಯ ಕೊರತೆಯಾಗಿದ್ದ ಗಣಕ ಯಂತ್ರಗಳು ಇನ್ನು ಮುಂದೆ ಆ ಶಾಲೆಯ ಮಕ್ಕಳ ಪ್ರಗತಿಗೆ ಸಹಾಯಕವಾಗಲೆಂದು ಆಶಿಸೋಣ. ಹಾಗೆಯೇ ಆ ಶಾಲೆಯಲ್ಲಿ ಗಣಕ ಯಂತ್ರದ ತರಬೇತಿ ನೀಡುವ ಶಿಕ್ಷಕರಿರುವುದನ್ನು ಖಚಿತಪಡಿಸಿಕೊಂಡಿದ್ದೇವೆ.

ಇನ್ನು ಶಾಲೆಯ ವಿಷಯಕ್ಕೆ ಬಂದರೆ ನಿಜಕ್ಕೂ ಹೆಮ್ಮೆ ಪಡುವ ವಿಚಾರಗಳಿವೆ....

ಈ ಶಾಲೆಯಲ್ಲಿ ಸುಮಾರು ೫೦೦ ಮಂದಿ ಬಾಲಕಿಯರು ಶಿಕ್ಷಣ ಪಡೆಯುತ್ತಿದ್ದಾರೆ..ಹತ್ತನೇ ತರಗತಿಯಲ್ಲೇ ೯೦ ಮಂದಿ ವ್ಯಾಸಂಗ ಮಾಡುತ್ತಿದ್ದಾರೆ..ನಗರದವರಿಗೆ ಇದು ದೊಡ್ಡ ವಿಷಯ ಎನಿಸದಿದ್ದರೂ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಷ್ಟು ಪ್ರಾಮುಖ್ಯತೆ ಇಲ್ಲದ ಹಳ್ಳಿಯ ವಾತಾವರಣದಲ್ಲಿ ಬಹು ದೊಡ್ಡ ಸಾಧನೆಯಾಗೆ ತೋರುತ್ತದೆ..ಹಾಗೆಯೇ ಅಷ್ಟೂ ಮಂದಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾದುತ್ತಿರುವುದು ಎಲ್ಲಿದೆ ಕನ್ನಡ ಎನ್ನುವವರಿಗೂ ಉತ್ತರ... ಬರಿಯ ಸಂಖ್ಯಾ ಬಾಹುಳ್ಯದಲ್ಲಷ್ಟೇ ಅಲ್ಲ..ಸಾಧನೆಯಲ್ಲೂ ಈ ಹುಡುಗಿಯರು ಮುಂದಿದ್ದಾರೆ....

ಆ ಶಾಲೆಯ ಶಿಕ್ಷಕಿಯೋರ್ವರ ಮಾತಿನಲ್ಲೇ ಹೇಳುವುದಾದರೆ...ಅಂತರ ಶಾಲಾ ಸ್ಪರ್ಧೆಗಳಲ್ಲಿ ೨೦ ಪ್ರತಿಶತ ಬಹುಮಾನಗಳು,ರಾಜ್ಯ ಮಟ್ಟದ ನಾಟಕ ಪ್ರದರ್ಶನ ನೀಡಿದ ಆ ಪ್ರದೇಶದ ಏಕೈಕ ಬಾಲಕಿಯರ ತಂಡ,ಬಹಳ ರಚನಾತ್ಮಕವಾಗಿ ಎಲ್ಲ ಕೆಲಸಗಳಲ್ಲು ಭಾಗವಹಿಸುವ ಬಾಲಕಿಯರು..

ಎಲ್ಲಕ್ಕೂ ಕಳಸವಿಟ್ಟಂತೆ ಇರುವುದು ಈ ಶಾಲೆಯ ಶಿಕ್ಷಕ ವೃಂದ.. ನಿಜವಾಗಲೂ ಅವರು ಶಾಲೆಯನ್ನು ಅಭಿವೃದ್ಧಿಪಡಿಸಲು ಟೊಂಕ ಕಟ್ಟಿ ನಿಂತಿರುವರೆಂದೇ ಎನಿಸುತ್ತದೆ.. ನಿಜ ಒಂದೇ ದಿನದಲ್ಲಿ ಯಾವ ನಿರ್ಧಾರಕ್ಕೂ ಬರಲಾಗುವುದಿಲ್ಲ..ಆದರೆ ನಿಜವಾಗಿಯೂ ಅಲ್ಲಿ ಅಭಿವೃದ್ಧಿಯ ಒಂದು ಸೆಲೆಯಂತೂ ಇದೆ...

ಕೊನೆಯದಾಗಿ.. .........

ಇದು ಸಣ್ಣ ಕೆಲಸವೇ ಆಗಿರಬಹುದು.ಆದರೆ ಇದೊಂದು ಸಾರ್ಥಕ ಕಾರ್ಯ. ಸಾಫ್ಟ್ ವೇರ್ ಇಂಜಿನಿಯರ್ ಗಳೆಂದರೆ ಬರಿಯ ಸ್ವಾರ್ಥಿಗಳು,ದುಂದು ವೆಚ್ಚಿಗಳು ಎನ್ನುವ ಅಭಿಪ್ರಾಯ ಹೋಗಲಾಡಿಸಲು ಇಂಥ ಕಾರ್ಯಗಳು ನೆರವಾಗಬಹುದು:)

ಮುಂದೆ ನಮ್ಮ ಬಳಗದಿಂದ ಆಗಬೇಕಾಗಿರುವ ಎಷ್ಟೋ ಮಹಾಕಾರ್ಯಗಳಿಗೆ ಇದೊಂದು ಮುನ್ನುಡಿಯಷ್ಟೆ..ಇಂದು ಕಿಡಿ , ಮುಂದೆ ಜ್ವಾಲೆಯಾಗಬಹುದು... ಇದರ ಶ್ರೇಯಸ್ಸು ಬಳಗದ ಪ್ರತಿಯೊಬ್ಬ ಸದಸ್ಯರಿಗೂ ಸೇರಿದ್ದು...

ಈ ಕಾರ್ಯದಲ್ಲಿ ನೆರವಾದ ಎಲ್ಲರಿಗೂ ಅಭಿನಂದನೆಗಳು..ಗುಡಿಬಂಡೆಗೆ ಹೋಗಿಬರಲು ಸಹಾಯ ಮಾಡಿದ ಸುಂದರೇಶ್ ಹಾಗೂ ಆನಂದ್ ರವರಿಗೆ ವಿಶೇಷ ಕೃತಙ್ಞತೆಗಳು. ಆನಂದ್ ರವರು ಪುಸ್ತಕ ಕಪಾಟನ್ನು ಕೊಡುಗೆಯಾಗಿ ನೀಡಿ ಇತರರಿಗೆ ಮಾದರಿಯಾಗಿದ್ದಾರೆ..

ವಿವೇಕಾನಂದರ ಈ ವಾಣಿ ನಮ್ಮೆಲ್ಲರ ಬದುಕಿಗೆ ಬೆಳಕಾಗಲಿ...

ಈ ಜಗತ್ತು ಬರಿಯ ಆಟ.ನೀವೆಲ್ಲಾ ಭಗವಂತನ ಈ ಆಟದ ಸಂಗಾತಿಗಳು. ಯಾವ ಶೋಕವೂ ಇಲ್ಲದೆ,ಯಾವ ಸಂಕಟವೂ ಇಲ್ಲದೆ ಕೆಲಸ ಮಾಡುತ್ತಾ ಹೋಗಿ..ನೀವು ಯಾರಿಗಾದರೂ ಸಹಾಯ ಮಾಡುವಿರೆಂಬುದು ಬೂಟಾಟಿಕೆ..ಮೊದಲು ಸಹಾಯ ಮಾಡುವ ಭಾವನೆಯನ್ನು ಕಿತ್ತೊಗಿಯಿರಿ...ನಂತರ ಪೂಜಿಸುತ್ತಾ ಹೋಗಿ.ನೀವೆಲ್ಲಾ ಆ ಭಗವಂತನ ಸೇವಕರು..ಜೀವಂತ ಭಗವಂತನ ಸೇವೆ ಮಾಡಿ!

- ರೇಣುಕ ಶ್ರೀಹರ್ಷ

ಭಾನುವಾರ, ಮಾರ್ಚ್ 1, 2009

ಕನ್ನಡ ದಿನಪತ್ರಿಕೆಗಳು



ಬಳಗದಿಂದ ೮ ದಿನ ಪತ್ರಿಕೆಗಳನ್ನು ತರಿಸುತ್ತಿದ್ದೇವೆ
ನೆಲ ಮಹಡಿ (ಸ್ವಾಗತಕಾರಿಣಿ) - ವಿಜಯ ಕರ್ನಾಟಕ, ಪ್ರಜಾ ವಾಣಿ
೧ ನೇ ಮಹಡಿ - ಕನ್ನಡ ಪ್ರಭ
೨ ನೇ ಮಹಡಿ - ವಿಜಯ ಕರ್ನಾಟಕ
೩ ನೇ ಮಹಡಿ - ಉದಯವಾಣಿ
೪ ನೇ ಮಹಡಿ - ಸಂಯುಕ್ತ ಕರ್ನಾಟಕ
೫ ನೇ ಮಹಡಿ - ಉದಯವಾಣಿ
೬ ನೇ ಮಹಡಿ - ಪ್ರಜಾ ವಾಣಿ
೭ ನೇ ಮಹಡಿ - ವಿಜಯ ಕರ್ನಾಟಕ (ಇದು ಬಿ.ಯು. ವತಿಯಿಂದ ಮೊದಲಿಂದಲೂ ಬರುತ್ತಿದೆ)