ನಮ್ಮ ಮೊದಲ ಕಾರ್ಯಕ್ರಮ ರಾಮಮೂರ್ತಿ ನಗರದ ಕೌದೇನಹಳ್ಳಿ ಶಾಲೆಯಲ್ಲಿ ಯಶಸ್ವಿಯಾಗಿ ನೆರವೇರಿತು.
ಎಲ್ಲ ಮಕ್ಕಳಿಗೂ ವರುಷಕ್ಕಾಗುವಷ್ಟು ಪುಸ್ತಕಗಳು, ಪೆನ್ಸಿಲ್ಲು, ಪೆನ್ನು, ಜ್ಯಾಮಿತಿ ಪೆಟ್ಟಿಗೆಯನ್ನು ಹಂಚಿದೆವು.
ಮಕ್ಕಳಲ್ಲಿ ಪುಟಿಯುತ್ತಿದ್ದ ಆನಂದ, ಉಪಾಧ್ಯಾಯರ ಮುಖಗಳನ್ನೂ ಚಿಮ್ಮುತ್ತಿತ್ತು.
ಬಹಳ ಸಾರ್ಥಕವಾದ ಕಾರ್ಯಕ್ರಮ. ಚಿತ್ರಗಳನ್ನು ನಾಳೆ ಕಳಿಸುತ್ತೇವೆ.
ಬಳಗದಿಂದ ಭಾಗವಹಿಸಿದ ಪ್ರಶಾಂತ್, ಸುಂದರೇಶ್, ಅಶ್ವತ್ಥ್, ಕಲಾವತಿ, ಅಂಜನ್ ಮತ್ತು ಚಂದ್ರು ಅವರಿಗೆ ಧನ್ಯವಾದಗಳು.
ಕೊನೆಯದಾಗಿ:
ಉಪಾಧ್ಯಾಯರಾದ ಜಯಂತಿ ಕುಮಾರಿಯವರು ಬಳಗದ ಕಾರ್ಯದ ಬಗೆಗೆ ಸ್ಫೂರ್ತಿಗೊಂಡು, ಅಲ್ಲೇ ಒಂದು ಸಣ್ಣ ಕವಿತೆ ರಚಿಸಿ,
ಮೇಳದೊಡನೆ ಹಾಡಿದಾಗ, ನಮ್ಮಲ್ಲಿ ಖಂಡಿತಾ ಒಂದು ತೃಪ್ತಿ ತುಂಬಿತ್ತು.
ಚಿತ್ರಗಳು:
http://www.facebook.com/media/set/?set=a.133329886747514.35112.100002115116128&l=e9267a2dff
ಗುರುವಾರ, ಜೂನ್ 23, 2011
ಕಲಿಕಾ ಸಾಮಗ್ರಿ ವಿತರಣಾ ಯೋಜನೆ - ೨೦೧೧ - ರಾಮಮೂರ್ತಿ ನಗರದ ಶಾಲೆ
ಸಮಯ 06:51 PM
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
0 ಅಭಿಪ್ರಾಯಗಳು:
ಕಾಮೆಂಟ್ ಪೋಸ್ಟ್ ಮಾಡಿ