ಬುಧವಾರ, ಜುಲೈ 6, 2011

ಕಲಿಕಾ ಸಾಮಗ್ರಿ ವಿತರಣಾ ಯೋಜನೆ - ೨೦೧೧ - ಗುಡಿಬಂಡೆಯ ಶಾಲೆ

ಗುಡಿಯ ಅನುಭವ:

ಅದ್ಭುತ, ಅಮೋಘ, ಅನನ್ಯ - ಯಾವ ಪದದಿಂದಲೇ ವರ್ಣಿಸಿ, ಗುಡಿಬಂಡೆ ಶಾಲೆಯ ಮುಂದೆ ಅದು ಕಡಿಮೆಯೇ..

ಅಂಥ ಅಮೋಘವಾದ ಶಾಲೆಯ ಜೊತೆ ಸಖ್ಯ ಹೊಂದಿರುವುದೇ ಬಳಗಕ್ಕೆ ಒಂದು ಹೆಮ್ಮೆ.

ನಮ್ಮ ಜೊತೆಗೆ ಬಂದಿದ್ದ ಸಿ.ಎಸ್. ಪ್ರಸಾದ ಅನ್ನುವ ಅಧ್ಯಾಪಕರು (ಕನ್ನಡ ವ್ಯಾಕರಣ ಪುಸ್ತಕದ ಕರ್ತೃ, ಇವರ ಪುಸ್ತಕವನ್ನೇ ನಾವು ಮಕ್ಕಳಿಗೆ ಕೊಟ್ಟೆವು)

"ಎಂಥ ಅದ್ಭುತ ಶಾಲೆ. ವಿದ್ಯಾರ್ಥಿ, ಶಿಕ್ಷಕರ ಸಂಬಂಧ ಎಷ್ಟು ವಿಶಿಷ್ಠ. ಈ ರೀತಿ ಬೆಂಗಳೂರಿನಲ್ಲಿ ಕಾಣಲು ಸಾಧ್ಯವೇ ಇಲ್ಲ " ಅಂದುಬಿಟ್ಟರು.

ನಮ್ಮನ್ನು ಶಾಲೆಯೊಳಗೆ ಎದುರುಗೊಂಡ ರೀತಿ, ಸತ್ಕಾರ, ೪ ಗಂಟೆ ಅಲ್ಲಾಡದ ಹಾಗೆ, ಕಾರ್ಯಕ್ರಮ ವೀಕ್ಷಿಸಿದ ೩೮೦ ಮಕ್ಕಳು !!!

ಇದೆಲ್ಲಕ್ಕೂ ನಮ್ಮ ಮನಸ್ಸನ್ನು ಕಲಕಿದ ಸಂಗತಿ ಇದು.

ಅಲ್ಲಿನ ಸುಮಾರು ೫ ಉಪಾಧ್ಯಾಯರಿಗೆ ಬೇರೆ ಊರಿಗೆ ವರ್ಗಾವಣೆಯಾಗಿದೆ. ಅವರಿಗೆ ನಮ್ಮ ಬಳಗದ ಸಮ್ಮುಖದಲ್ಲಿ ಬೀಳ್ಕೊಡುಗೆ ಏರ್ಪಡಿಸಿದ್ದರು. "ಶಫಿ" ಅವರು (ವರ್ಗಾವಣೆಯಾದ ಉಪಾದ್ಯಾಯರಲ್ಲೊಬ್ಬರು) ಮಾತನಾಡಲು ವೇದಿಕೆಗೆ ಬಂದರೆ, ಅವರಿಗೆ ಮಾತು ಹೊರಡುತ್ತಿಲ್ಲ. ಬಿಕ್ಕಿ ಅಳುತ್ತಿದ್ದಾರೆ. ನೋಡಿದರೆ, ಮಕ್ಕಳೆಲ್ಲಾ ಅಳುತ್ತಿದ್ದಾರೆ. ನಮಗೆ ಇದೇನಾಗುತ್ತಿದೆ ಅಂತ ಕಣ್ಣನ್ನು ದೊಡ್ಡದು ಮಾಡಿ ನೋಡುತ್ತಿದ್ದೇವೆ.

ನಂತರ ಬಂದ ಮತ್ತೊಬ್ಬ ಉಪಾಧ್ಯಾಯರಾದ "ಪ್ರವೀಣ್ ಕುಮಾರ್" ಹೇಳ್ತಿದ್ರು, ಅವರ ಮನೆಯಲ್ಲೇ ಅವರೊಬ್ಬ ಕಟುಕರ ಹಾಗಂತೆ. ಕಣ್ಣಲ್ಲಿ ನೀರು ಬಂದಿದ್ದು ಯಾರೂ ನೋಡಿಲ್ಲ. ಅವರ ಹೆಂಡತಿಗಿರುವ ಆಸೆ ಅಂದ್ರೆ ಇವರು ಅಳೋದು ನೋಡಬೇಕಂತೆ !!! ಅಂತ ಪ್ರವೀಣ್ ಶಾಲೆ ಬಿಡಬೇಕಲ್ಲ ಅಂತ ಅತ್ತಿದ್ದಾರೆ.

ಇದಿಷ್ಟು ನಿದರ್ಶನ ಸಾಕು ಶಾಲೆಯಲ್ಲಿ ಎಂಥ ವಾತಾವರಣವಿದೆ ಎಂದು ತಿಳಿಯೋಕೆ..

ನಂತರ, ಸುಮಾರು ೮೦ ಸಾವಿರ ರೂಪಾಯಿಗಳಷ್ಟು ಪ್ರತಿಭಾ ಪುರಸ್ಕಾರ ಮತ್ತು ಕಲಿಕಾ ಸಾಮಗ್ರಿಗಳನ್ನು ಹಂಚಿದೆವು. ಇದಕ್ಕೆಲ್ಲಾ ಕಾರಣರಾದ ಬಳಗದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.

ಪ್ರತಿ ಭೇಟಿಯಲ್ಲೂ ಅನನ್ಯ ಅನುಭವ ನೀಡುತ್ತಿರುವ ಗುಡಿಬಂಡೆ ಶಾಲೆಗೆ ಬಳಗದ ಪರವಾಗಿ ಅತ್ಯಂತ ಧನ್ಯವಾದಗಳು.


ಚಿತ್ರಗಳು:

http://www.facebook.com/media/set/?set=a.136817176398785.35965.100002115116128&l=20b8eabc4b